Slide
Slide
Slide
previous arrow
next arrow

ಅರ್ಧ ಎಕರೆ ತೋಟ ಜಲಾವೃತ; ಅಪಾರ ಹಾನಿ

300x250 AD

ಶಿರಸಿ: ತಾಲೂಕಿನ ಹುತ್ಗಾರ್ ಹಳ್ಳಿಬೈಲ್ ಸಮೀಪದ ಬಿಳೆಕಲ್ ಊರಿನ ನಾರಾಯಣ ಹೆಗಡೆ ಎಂಬುವರಿಗೆ ಸೇರಿರುವ ತೋಟಕ್ಕೆ ತಾಗಿರುವ ಗುಡ್ಡ ಕುಸಿದು ಅಪಾರ ಪ್ರಮಾಣದ ಹಾನಿಯಾಗಿದೆ. ಕಳೆದ ಹದಿನೈದು ದಿನದಿಂದ ಸುರಿಯುತ್ತಿರುವ ಮಳೆ, ಗಾಳಿ ಕಾರಣಕ್ಕೆ ಅರ್ಧ ಎಕರೆಗೂ ಹೆಚ್ಚು ಪ್ರದೇಶ ಜಲಾವೃತವಾಗಿದ್ದು, ಹಲವಾರು ಅಡಿಕೆ ಮರಗಳು ಗಾಳಿಯ ರಭಸಕ್ಕೆ ಮುರಿದು ಬಿದ್ದಿದೆ.

ತೋಟದಲ್ಲಿ ನೀರು ರಭಸದಿಂದ ಹರಿದ ಪರಿಣಾಮ ತೋಟಕ್ಕೆ ಮಾಡಿರುವ ಮುಚ್ಚಿಗೆ, ಗೊಬ್ಬರ ಎಲ್ಲಾ ನೀರಲ್ಲಿ ಕೊಚ್ಚಿ ಹೋಗಿದ್ದು, ಕೊಳೆ ರೋಗ ಬರುವ ಸಂಭವ ಹೆಚ್ಚಿದೆ. ಆ ಮೂಲಕ ರೈತರ ವಾರ್ಷಿಕ ಬೆಳೆಯೇ ನೀರುಪಾಲಾಗಿದೆ. ಅಡಿಕೆ ಬೆಳೆಯನ್ನೇ ಜೀವನಾಧಾರವಾಗಿಟ್ಟುಕೊಂಡಿರುವ ರೈತರಿಗೆ ಇಂತಹ ಘಟನೆಗಳು ನಿಜಕ್ಕೂ ಬದುಕಿನ ಧೈರ್ಯವನ್ನೇ ಕಳೆದುಕೊಳ್ಳುವಂತೆ ಮಾಡುತ್ತಿದ್ದು, ಕೂಡಲೇ ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಸರಕಾರದಿಂದ ಸಂತ್ರಸ್ಥರಿಗೆ ದೊರೆಯುವ ಪರಿಹಾರವನ್ನು ನೀಡಬೇಕೆಂಬುದು ಎಲ್ಲರ ಕಳಕಳಿಯಾಗಿದೆ.

300x250 AD
Share This
300x250 AD
300x250 AD
300x250 AD
Back to top